|| ಶ್ರೀಮತೆ ರಾಮಾನುಜಾಯ ನಮಃ ||

ಶ್ರೀ ವೈಷ್ಣವ ಸೇವಾ ಸಮಿತಿ ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀವೈಷ್ಣವರ ಒಂದು ಒಕ್ಕೂಟ. ಜಾತವಾರದ ಶ್ರೀ ಪ್ರಸನ್ನ ಕೇಶವ ದೇವಸ್ಥಾನ ಇದರ ಕೇಂದ್ರ ಬಿಂದು. ಶ್ರೀವೈಷ್ಣವ ಸಿದ್ದಾಂತವಾದ ವಿಶಿಷ್ಟಾದ್ವೈತ, ಭಗವದ್ ಶ್ರೀ ರಾಮಾನುಜಾಚಾರ್ಯರ ಬೋಧನೆ, ನಮ್ಮ ಸಂಪ್ರದಾಯ ಮತ್ತು ನಮ್ಮ ಶ್ರೀವೈಷ್ಣವ ಬಂಧುಗಳ ನಡುವಿನ ಆಗುಹೋಗು ವಿಷಯಗಳನ್ನು ಎಲ್ಲಾ ಸದಸ್ಯರಿಗೆ ತಿಳಿಸುವ ಉದ್ದೇಶದಿಂದ ಸ್ಥಾಪಿಸಲಾದ ಸಮಿತಿಯು ಇದೆಲ್ಲವನ್ನು ನಿಷ್ಠೆಯಿಂದ ನಡೆಸಿಕೊಂಡು ಬರುತ್ತಿದೆ.

ಜಾತವಾರ ಸುತ್ತಮುತ್ತಲಿನ ಗ್ರಾಮ ಮತ್ತು ಹಳ್ಳಿಗಳಲ್ಲಿ ಹಲವಾರು ಶ್ರೀವೈಷ್ಣವ ಕುಟುಂಬಗಳು ವಾಸವಿದ್ದು ಇವರೆಲ್ಲರನ್ನು ಒಗ್ಗೂಡಿಸುವ ಕೆಲಸವನ್ನು ಸಮಿತಿಯು ಮಾಡುತ್ತಾ ಬಂದಿದೆ. ನಮ್ಮ ಹಿರಿಯರು ೨೦೦೮ ರಲ್ಲಿ ಈ ಸಮಿತಿಯನ್ನು ಪ್ರಾರಂಭಿಸಿ ಇದನ್ನು ನೋಂದಾಯಿಸಿದರು. ಹಲವಾರು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಅದನ್ನು ಕಾರ್ಯಗತಗೊಳಿಸುತ್ತಾ ಬಂದಿರುವ ಕೆಲವನ್ನು ಕೆಳಗೆ ತಿಳಿಹೇಳಲಾಗಿದೆ.

ನಮ್ಮ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು

  • ತ್ರೈ ಮಾಸಿಕ "ಪ್ರಪತ್ತಿ" ಪತ್ರಿಕೆಯನ್ನು ಪ್ರಕಟಿಸುತ್ತಾ ನಮ್ಮ ಶ್ರೀವೈಷ್ಣವ ಸಿದ್ಧಾಂತವನ್ನು ಸಾರುತ್ತಿದೆ
  • ಸಮಾಜಕ್ಕೆ ಉಪಯೋಗವಾಗಲೆಂದು ಜಾತವಾರದಲ್ಲಿ ಶ್ರೀ ರಾಮಾನುಜ ಸಮುದಾಯ ಭವನವನ್ನು ನಿರ್ಮಿಸಿದೆ
  • ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ - ಹತ್ತನೆ ತರಗತಿ ಮತ್ತು ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಹೆಚ್ಚು ಅಂಕವನ್ನು ಪಡೆದಿರುವ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ನೀಡುತ್ತಾ ಬಂದಿದೆ
  • ವಧು ವರ ಅನ್ವೇಶಿಸುತ್ತಿರುವವರಿಗೆ "ಕಂಕಣ ಸಿರಿ" ಎಂಬ ವೇದಿಕೆಯಲ್ಲಿ ಹಲವಾರು ಶ್ರೀವೈಷ್ಣವರಿಗೆ ಮದುವೆಯಾಗಿದೆ
  • ವಂಶವೃಕ್ಷ ಮತ್ತು ಹಲವು ಪುಸ್ತಕಗಳನ್ನು ಮುದ್ರಿಸಿ ಪ್ರಕಟಿಸುತ್ತಾ ಬರುತ್ತಿದೆ
  • ಶ್ರೀರಾಮಪುರದ ಬಂಧುಗಳ ಜೊತೆಗೂಡಿ ಸಾಮೂಹಿಕ ಉಪಕರ್ಮ ಮತ್ತು ಬೆಂಗಳೂರಿನಲ್ಲಿ ಅಮಾವಾಸ್ಯ ತರ್ಪಣ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ
  • ಕಲೆಯನ್ನು ಪ್ರೋತ್ಸಾಹಿಸಲು ಆದಿ ಮಾಸದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿದೆ
  • ಕ್ಯಾಲೆಂಡರ್ ಮತ್ತು ಪಂಚಾಂಗ - ನಮ್ಮ ಶ್ರೀವೈಷ್ಣವ ಸಿದ್ದಾಂತವನ್ನು ಸಾರುವ ದಿನಚರಿಯನ್ನು ಮತ್ತು ಪಂಚಾಂಗವನ್ನು ಸದಸ್ಯರಿಗೆ ಪ್ರತಿ ವರ್ಷ ವಿತರಿಸುತ್ತಾ ಬರುತ್ತಿದ್ದೇವೆ
  • ಜಾತವಾರದ ಶ್ರೀ ಪ್ರಸನ್ನ ಕೇಶವ ದೇವಸ್ಥಾನ ಬ್ರಹ್ಮೋತ್ಸವವನ್ನು ಮುಂದಿನ ವರ್ಷದಿಂದ ದೇವಸ್ಥಾನ ಟ್ರಸ್ಟ್ ನ ಜೊತೆಗೂಡಿ ಸಮಿತಿಯ ವತಿಯಿಂದ ನಡೆಸಲು ನಿರ್ಧರಿಸಿದೆ
  • ಜನರಿಗೆ ಮಾಹಿತಿಯನ್ನು ಕೈ ಬೆರಳುಗಳಲ್ಲಿ ನೀಡಲು ಈ ವೆಬ್‌ಸೈಟ್ ಅನ್ನು ತಂದಿದೆ
  • ನಮ್ಮ ವಂಶ ವೃಕ್ಷವನ್ನು ಡಿಜಿಟಲೀಕರಣ ಮಾಡಲು ಒಂದು ಬೃಹತ್ ಕಾರ್ಯ ತೆಗೆದುಕೊಂಡಿದೆ. ಇದರಿಂದ ಪ್ರಸ್ತುತವಿರುವ ವಂಶವೃಕ್ಷವನ್ನು ನವೀಕರಿಸಲು ತೀರ್ಮಾನಿಸಿದೆ
  • ಮುಂದಿನ ಯೋಜನೆಗಳಲ್ಲಿ ನಮ್ಮ ಯುವಕರ ವಿಭಾಗವಾದ ಯುವೈಕ್ಯದ ಮೂಲಕ ಹೆಚ್ಚಿನ ಯುವಕರನ್ನು ಸಮಿತಿಯ ಕಾರ್ಯಗಳಿಗೆ ಒಳತರುವುದು. ಅನಿವಾಸಿ ಭಾರತೀಯರ ಉಪವಿಭಾಗವನ್ನು ತೆರೆಯಲು ಮತ್ತು ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಸಿದ್ಧತೆಯನ್ನು ನಡೆಸಿದೆ